ಬಾಗಲಕೋಟೆ: ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಝುಂಜರವಾಡ ಗ್ರಾಮದ ಕೊಳವಿ ಬಾವಿಯೊಳಗೆ ಆರು ವರ್ಷದ ಬಾಲಕಿ ಕಾವೇರಿ ಅಜಿತ್ ಮಾದರ ಬಿದ್ದಿದ್ದು, ಈಕೆ ಬದುಕಿ ಉಳಿಯಲೆಂದು ರಾಜ್ಯದ ಅನೇಕ ಕಡೆ ಪ್ರಾರ್ಥನೆ, ಪೂಜೆ–ಪುನಸ್ಕಾರಗಳು ನಡೆಯುತ್ತಿವೆ. ಇಂಥದೇ ಒಂದು ಘಟನೆ ತಾಲ್ಲೂಕಿನಲ್ಲಿ 2006ರಲ್ಲಿ ನಡೆದಿದ್ದು, ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಹಿಳೆಯೊಬ್ಬರನ್ನು ಆಗ ರಕ್ಷಿಸಲಾಗಿತ್ತು.