ದೇವರ ಉತ್ಸವಗಳು ಪೂಜಾ ಕೈಂಕರ್ಯಗಳು ದೇವಾಲಯ ಸಮಿತಿ ಅಧ್ಯಕ್ಷ ಪಿ.ರಾಜಪ್ಪ ಮತ್ತು ಕಾರ್ಯದರ್ಶಿ ಎ.ಎಚ್.ಶಿವಶಂಕರ್ ನೇತೃತ್ವದಲ್ಲಿ ನಡೆದವು. ಸಮಿತಿ ಖಜಾಂಚಿ ಎ.ಪಿ.ಧರ್ಮ, ನಿರ್ದೇಶಕರಾದ ಚರಣ್, ಎ.ಎಸ್.ಪ್ರಕಾಶ್, ಸಂತೋಷ್, ಹರೀಶ್, ಮನು, ಅರುಣ್, ರಂಗಸ್ವಾಮಿ, ಶಿವರಾಜ್, ರವಿ, ರತ್ನಾಕರ ಹಾಜರಿದ್ದರು.
ಹಬ್ಬದ ಅಂಗವಾಗಿ ವಿದ್ಯುತ್ ಅಲಂಕೃತ ಮಂಟಪದಲ್ಲಿ ದೇವಿ ಉತ್ಸವ ಮಂಟಪಗಳ ಮೆರವಣಿಗೆ ನಡೆಯಿತು. ಉತ್ಸವಕ್ಕೆ ಜಿ.ಪಂ.ಸದಸ್ಯ ಎಚ್.ಆರ್.ಶ್ರೀನಿವಾಸ್ ಹಾಗೂ ಐಎನ್ಟಿಯುಸಿ ರಾಜ್ಯ ಕಾರ್ಯದರ್ಶಿ ಎಂ.ಎನ್.ಮುತ್ತಪ್ಪ ಚಾಲನೆ ನೀಡಿದರು. ಗ್ರಾ.ಪಂ.ಅಧ್ಯಕ್ಷ ಕೆ.ಎನ್.ದೇವರಾಜ್, ಉಪಾಧ್ಯಕ್ಷ ದಾಕ್ಷಾಯಿಣಿ, ಸದಸ್ಯರಾದ ಮಂಗಳಾ ಮಹೇಶ್, ರೂಪಹರೀಶ್, ಹಾಜರಿದ್ದರು.