ಸ್ಥಳಕ್ಕೆ ಬಂದ ಪಶುವೈದ್ಯಾಧಿಕಾರಿ ಡಾ.ನಾಗರಾಜ್ ಅವರು ಮೊಸಳೆ ಮೃತಪಟ್ಟಿರುವುದನ್ನು ಖಚಿತಪಡಿಸಿದರು. ಮರಣೋತ್ತರ ಪರೀಕ್ಷೆ ನಡೆಸಿದ ಅವರು, ಅನಾರೋಗ್ಯದಿಂದ ಮೊಸಳೆ ಆಹಾರ ಸೇವಿಸಿಲ್ಲ. ಎರಡು ದಿನಗಳ ಹಿಂದೆಯೇ ಇದು ಮೃತಪಟ್ಟಿರಬಹುದು. ಇದರ ಹೃದಯ, ಕಿಡ್ನಿ, ಯಕೃತ್ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದರು.