ಪಟ್ಟಣದ ಬಸ್ ನಿಲ್ದಾಣದ ಬಳಿ ಸಾಕಷ್ಟು ನೀರಿನ ಮೂಲ ಇರುವ ಪುರಾತನ ಬಾವಿ ಈಗ ಕಸ ಮತ್ತು ತ್ಯಾಜ್ಯ ವಿಲೇವಾರಿಗಾಗಿ ಬಳಕೆಯಾಗುತ್ತಿದೆ. ಹರ್ಷಗುಪ್ತ ಅವರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಬಾವಿ ಜೀರ್ಣೋದ್ಧಾರ ಮಾಡಿ ಸಾರ್ವಜನಿಕರಿಗೆ ನೀರು ಬಳಸಲು ಅನುವು ಮಾಡಿಕೊಟ್ಟಿದ್ದರು. ಆದರೆ, ನಂತರ ಈ ಬಾವಿ ಉಪೇಕ್ಷೆಗೆ ಒಳಗಾಗಿ ಈಗ ಅದು ಘನತ್ಯಾಜ್ಯ ವಿಲೇವಾರಿ ತೊಟ್ಟಿಯಾಗಿ ಪರಿಣಮಿಸಿದೆ.