ವ್ಯಾಪಾರಿ ಗೋಪಾಲಸಿಂಗ್ ಅವರನ್ನು ಜ. 30ರಂದು ಅಪರಹರಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಮರುದಿನ ಇವರನ್ನು ಅಪಹರಣದಿಂದ ವಿಮುಕ್ತಗೊಳಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅವಿನಾಶ್, ರಮೇಶ್, ಕಾರ್ತಿಕ್, ಮುತ್ತುರಾಜ್, ವಿಜಿ, ಚಂದ್ರಶೇಖರ್ ಎಂಬುವರನ್ನು ಬಂಧಿಸಿದ್ದರು. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ವಿಚಾರಣಾಧೀನ ಕೈದಿ ಅರುಣ್ ಶಾಮೀಲಾಗಿದ್ದು ಬೆಳಕಿಗೆ ಬಂದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.