ಹುನ್ನೂರಿನ ಸಿದ್ದಪ್ಪ– ಸುವರ್ಣ ದಂಪತಿ ಪುತ್ರ ರಮೇಶ ಎಂಜಿನಿಯರಿಂಗ್ (ಕಂಪ್ಯೂಟರ್ ಸೈನ್ಸ್) ಪದವೀಧರರಾಗಿದ್ದು, ಕೆಪಿಎಸ್ಸಿ ಪರೀಕ್ಷೆಯಲ್ಲಿ ಎರಡನೇ ಪ್ರಯತ್ನದಲ್ಲಿ ಉಪ ವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದಾರೆ. ಯಾವುದೇ ವಿಶೇಷ ತರಬೇತಿ ಪಡೆಯದೆ ಧಾರವಾಡದಲ್ಲಿ ಇದ್ದುಕೊಂಡು ಸ್ವಯಂ ಅಧ್ಯಯನ ಮಾಡಿದ್ದಾರೆ. ಹಾಲು ಮಾರಿ ಹಾಗೂ ಜಾತ್ರೆಗಳಲ್ಲಿ ತೆಂಗಿನಕಾಯಿ ಮಾರಿ ಬಂದ ಹಣದಿಂದ ಅವರು ಶಿಕ್ಷಣ ಪೂರೈಸಿದ್ದಾರೆ.