ಬೆಂಗಳೂರು: ಯುವರಾಜ್ ಸಿಂಗ್ ಮತ್ತು ಡೇವಿಡ್ ವಾರ್ನರ್ ಅವರು ಬೆಂಗಳೂರು ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತ. ಅವರು ಬಳಲಿಕೆಯಿಂದ ಚೇತರಿಸಿಕೊಂಡಿದ್ದಾರೆ ಎಂದು ಸನ್ರೈಸರ್ಸ್ ತಂಡದ ಮುಖ್ಯ ಕೋಚ್ ಟಾಮ್ ಮೂಡಿ ಹೇಳಿದ್ದಾರೆ.
‘ಆರ್ಸಿಬಿ ಎದುರು ಈ ಹಿಂದೆ ನಾವು ಸತತ ಎರಡು ಗೆಲುವು ಸಾಧಿಸಿದ್ದೇವೆ. ಆದರೆ ಪ್ರತಿಯೊಂದು ಪಂದ್ಯವು ಹೊಸತು. ಆದ್ದರಿಂದ ಯಾವುದೆ ಹಂತದಲ್ಲಿಯೂ ಉತ್ತಮವಾಗಿಯೇ ಆಡುತ್ತೇವೆ.
ಕೋಲ್ಕತ್ತದಲ್ಲಿ ಆರ್ಸಿಬಿ ತಂಡವು 49ಕ್ಕೆ ಆಲೌಟ್ ಆಗಿತ್ತು. ಆದರೆ ಮತ್ತೊಮ್ಮೆ ತಪ್ಪು ಮಾಡುವ ತಂಡ ಅದಲ್ಲ. ಅದು ಇನ್ನಷ್ಟು ಅಪಾಯಕಾರಿ ಯಾಗಿ ತಿರುಗೇಟು ನೀಡುವ ಸಾಮರ್ಥಯ ಹೊಂದಿದೆ’ ಎಂದರು.