ದಾವಣಗೆರೆ: ನಗರ ಹೊರವಲಯದ ದೊಡ್ಡಬೂದಿಹಾಳ, ಚಿಕ್ಕಬೂದಿಹಾಳ ಮತ್ತು ದೇವರಹಟ್ಟಿ ವ್ಯಾಪ್ತಿಯಲ್ಲಿ ‘ದೂಡಾ’ ಅನುಮತಿಯಿಲ್ಲದೇ ನಿರ್ಮಿ ಸಿದ್ದ ಬಡಾವಣೆಗಳನ್ನು ಸೋಮವಾರ ತೆರವುಗೊಳಿಸಲಾಯಿತು.
ತಹಶೀಲ್ದಾರ್ ಸಂತೋಷಕುಮಾರ್ ಹಾಗೂ ‘ದೂಡಾ’ ಆಯುಕ್ತ ಆದಪ್ಪ ಅವರ ನೇತೃತ್ವದ ತಂಡ ಆ ವ್ಯಾಪ್ತಿಯ ಸರ್ವೆ ನಂ.5, 6 ಮತ್ತು 13 ಸರ್ವೆ ನಂಬರ್ಗಳಲ್ಲಿ ನಿರ್ಮಿಸಲಾಗಿದ್ದ ಸುಮಾರು ಇಪ್ಪತ್ತು ಎಕರೆ ಬಡಾವಣೆ ಸ್ಥಳವನ್ನು ತೆರವುಗೊಳಿಸಲಾಯಿತು.
‘ಬಡಾವಣೆಗಳಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳನ್ನು ನೀಡಿಲ್ಲ. ಅಲ್ಲದೇ ಯೋಜನಾ ವ್ಯವಸ್ಥೆಗೆ ವಿರುದ್ಧವಾಗಿ ಬಡಾವಣೆಗಳನ್ನು ನಿರ್ಮಿಸಿ ಅಮಾಯಕರಿಗೆ ವಂಚಿಸಲಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು ಹಾಗೂ ಈ ಜಾಗವನ್ನು ಸರ್ಕಾರಿ ಜಾಗವೆಂದು ಪರಿಗಣಿಸಲು ಕೋರಲಾಗುವುದು’ ಎಂದು
ಸಂತೋಷ್ ಕುಮಾರ್ ಹೇಳಿದರು.
‘ಈ ಬಗ್ಗೆ ಹಲವು ಬಾರಿ ಮಾಧ್ಯಮಗಳಲ್ಲಿ ಸಾರ್ವಜನಿಕ ಪ್ರಕಟಣೆ ನೀಡಿ ಎಚ್ಚರಿಸಲಾಗಿದೆ. ಆದರೂ ಸಾರ್ವಜನಿಕರು ಮೋಸ ಹೋಗುತ್ತಿದ್ದಾರೆ’ ಎಂದು ದೂಡಾ ಆಯುಕ್ತ ಹೇಳಿದರು.
ಈ ಕಾರ್ಯಾಚರಣೆಯಲ್ಲಿ ‘ದೂಡಾ’ ಕಾರ್ಯಪಾಲಕ ಎಂಜಿನಿಯರ್ ಶ್ರೀಕರ್, ಜಂಟಿ ನಿರ್ದೇಶಕ ಗೋಪಾಲಕೃಷ್ಣ, ರೇಣುಕಾಪ್ರಸಾದ್ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳು ಇದ್ದರು.