ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿಗೃಹದಲ್ಲಿದ್ದ ಗಂಧದ ಮರ ಕಳವು

Last Updated 25 ಏಪ್ರಿಲ್ 2017, 5:36 IST
ಅಕ್ಷರ ಗಾತ್ರ

ಕೊಳ್ಳೇಗಾಲ: ನಗರದ ಲೋಕೋಪ ಯೋಗಿ ಇಲಾಖೆ ವಸತಿ ಗೃಹದಲ್ಲಿ ಬೆಳೆದಿದ್ದ ಬೃಹದಾಕಾರದ ಗಂಧದ ಮರವನ್ನು ಕಳ್ಳರು ಭಾನುವಾರ ರಾತ್ರಿ ಕದ್ದೊಯ್ದಿದ್ದಾರೆ.

ವಸತಿ ಗೃಹದ ಎಲ್ಲಾ ಮನೆ ಬಾಗಿಲುಗಳಿಗೂ ಕೇಬಲ್‌ ವೈರ್‌ನಿಂದ ಬಿಗಿದು ನಿವಾಸಿಗಳು ಹೊರಬಾರದಂತೆ ಮಾಡಿ ನಾಯಿಗೆ ಖಾರದ ಪುಡಿ ಎರಚಿ ಗಂಧದ ಮರ ಕಳವು ಮಾಡಿದ್ದಾರೆ.

ಚಾಮರಾಜನಗರದ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಜಯಶಂಕರ ಅವರ ಮನೆ ಮುಂದೆ ಗಂಧದ ಮರ ಕಳವು ಮಾಡಲಾಗಿದೆ.

ಮುಂಜಾನೆ ಗಂಧದ ಮರ ಕಳವು ವಿಚಾರ ತಿಳಿಯುತ್ತಿದ್ದಂತೆಯೇ ವಲಯ ಅರಣ್ಯಾಧಿಕಾರಿ ಭೋಜಪ್ಪ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.
ನಗರ ಠಾಣೆ ಪೊಲೀಸರು ಈ ಸಂಬಂಧ ದೂರು ದಾಖಲಿಸಿ ಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT