ಕೊಳ್ಳೇಗಾಲ: ನಗರದ ಲೋಕೋಪ ಯೋಗಿ ಇಲಾಖೆ ವಸತಿ ಗೃಹದಲ್ಲಿ ಬೆಳೆದಿದ್ದ ಬೃಹದಾಕಾರದ ಗಂಧದ ಮರವನ್ನು ಕಳ್ಳರು ಭಾನುವಾರ ರಾತ್ರಿ ಕದ್ದೊಯ್ದಿದ್ದಾರೆ.
ವಸತಿ ಗೃಹದ ಎಲ್ಲಾ ಮನೆ ಬಾಗಿಲುಗಳಿಗೂ ಕೇಬಲ್ ವೈರ್ನಿಂದ ಬಿಗಿದು ನಿವಾಸಿಗಳು ಹೊರಬಾರದಂತೆ ಮಾಡಿ ನಾಯಿಗೆ ಖಾರದ ಪುಡಿ ಎರಚಿ ಗಂಧದ ಮರ ಕಳವು ಮಾಡಿದ್ದಾರೆ.
ಚಾಮರಾಜನಗರದ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಜಯಶಂಕರ ಅವರ ಮನೆ ಮುಂದೆ ಗಂಧದ ಮರ ಕಳವು ಮಾಡಲಾಗಿದೆ.
ಮುಂಜಾನೆ ಗಂಧದ ಮರ ಕಳವು ವಿಚಾರ ತಿಳಿಯುತ್ತಿದ್ದಂತೆಯೇ ವಲಯ ಅರಣ್ಯಾಧಿಕಾರಿ ಭೋಜಪ್ಪ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.
ನಗರ ಠಾಣೆ ಪೊಲೀಸರು ಈ ಸಂಬಂಧ ದೂರು ದಾಖಲಿಸಿ ಕೊಂಡಿದ್ದಾರೆ.