‘ಈ ವರ್ಷ ಸಂಕ್ರಾಂತಿ ಪುರುಷ ಬಂಗಾರದ ಲೋಟ ಹಿಡಿದು ಮೊಸರನ್ನ ತಿನ್ನುತ್ತಿದ್ದಾನೆ. ಬೆಳ್ಳಿ ಆಭರಣಗಳನ್ನು ಧರಿಸಿದ್ದಾನೆ. ಆತ ಏನು ಮುಟ್ಟಿದರೂ ಅದು ಅಭಿವೃದ್ಧಿಯಾಗುತ್ತದೆ. ಅಕ್ಷಯ ತೃತೀಯ ಯಾವುದೇ ದಿನ ಬರಲಿ ಚಿನ್ನ ಖರೀದಿಸುವವರು ಖರೀದಿ ಮಾಡೇ ಮಾಡುತ್ತಾರೆ’ ಎಂಬುದು ಅವರ ಅಚಲ ನಂಬಿಕೆ.
ಕೆಲವು ಅಂಗಡಿಗಳಲ್ಲಿ ಮುಂಚಿತವಾಗಿ ಬುಕಿಂಗ್ ಆಗಿದೆ. ಕೆಲವರು ಇದನ್ನು ಮಾಡುವುದಿಲ್ಲ. ಅಕ್ಷಯ ತೃತೀಯ ದಿನದಂದು ಅಂಗಡಿಗೆ ಹೋಗಲಾಗದವರು ಮುಂಚಿತವಾಗಿಯೇ ಆಭರಣ ಖರೀದಿಸಿ ಮನೆಯಲ್ಲಿಟ್ಟುಕೊಳ್ಳುತ್ತಾರೆ. ಅಂದಿನ ದಿನ ದೇವರ ಮುಂದೆ ಚಿನ್ನ ಇಟ್ಟು ಪೂಜೆ ಮಾಡಿ ದೇವರಿಗೆ ಹಾಕುತ್ತಾರೆ ಇಲ್ಲವೇ ತಾವೇ ಧರಿಸುತ್ತಾರೆ.
‘ಇದು ಒಳ್ಳೆಯ ವಾರ, ದಿನ, ಘಳಿಗೆ. ಅಕ್ಷಯ ತೃತೀಯ ದಿನದಂದು ಲಗ್ನವನ್ನೇ ನೋಡದೆ ಮದುವೆಯಾಗುವವರಿದ್ದಾರೆ, ಗೃಹಪ್ರವೇಶ ಮಾಡುವವರಿದ್ದಾರೆ. ನಿಮ್ಮ ಕೈಲಿ ಹಣ ಇದೆ, ಮನೆಯ ಯಜಮಾನರ ತಕರಾರು ಇಲ್ಲ ಅಂದ್ರೆ ಯಾಕೆ ಯೋಚನೆ ಮಾಡ್ತೀರಿ. ಸುಮ್ಮನೆ ಚಿನ್ನ ಕೊಂಡುಕೊಳ್ಳಿ’ ಎಂಬುದು ಶರತ್ಕುಮಾರ್ ಅವರ ಹಿತನುಡಿ.
‘ನಮ್ಮಲ್ಲಿ ಮುಂಗಡವಾಗಿ ಬುಕ್ ಮಾಡಿದರೆ ಆ ಬೆಲೆಯಲ್ಲೇ ಆಭರಣ ಖರೀದಿಸಬಹುದು. ಒಂದು ವೇಳೆ ಚಿನ್ನದ ದರದಲ್ಲಿ ಇಳಿಕೆಯಾದರೆ ಕಡಿಮೆ ದರದಲ್ಲೇ ಗ್ರಾಹಕರಿಗೆ ನೀಡುತ್ತೇವೆ. ಚಿನ್ನದ ದರ ಹೆಚ್ಚಾದರೂ ಮುಂಗಡ ದರದಲ್ಲಿಯೇ ನೀಡುತ್ತೇವೆ. ಇದು ಎಲ್ಲಾ ರೀತಿಯಿಂದಲೂ ಗ್ರಾಹಕರಿಗೆ ಲಾಭ.
ಮುಂಗಡವಾಗಿ ಹಣ ನೀಡಿದ್ದರಿಂದ ಅದೇ ದರದಲ್ಲಿ ಬ್ಲಾಕ್ ಮಾಡಿರುತ್ತೇವೆ. ಈ ಕೊಡುಗೆ ಏಪ್ರಿಲ್ 8ರಿಂದ 30ರವರೆಗೆ ಇರುತ್ತದೆ’ ಎನ್ನುತ್ತಾರೆ ಜೋಯ್ಅಲುಕ್ಕಾಸ್ ಕರ್ನಾಟಕದ ಮಾರ್ಕೆಟಿಂಗ್ ಮುಖ್ಯಸ್ಥ ಎಸ್. ಸುಧೀಶ್.