ವಾಹನಗಳ ಅಥವಾ ಇಂಧನ ಮಿತ ಬಳಕೆಯ ದೂರದೃಷ್ಟಿಯು ವಾರದ ರಜೆಯೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲವೆಂದು ಪೆಟ್ರೋಲಿಯಂ ಸಚಿವಾಲಯವೂ ಸ್ಪಷ್ಟಪಡಿಸಿದೆ. ಆದರೆ ದಕ್ಷಿಣ ಭಾರತದ ಪೆಟ್ರೋಲ್ ಬಂಕ್ ಮಾಲೀಕರ ಸಂಘ ಭಾನುವಾರ ಬಂಕ್ಗಳನ್ನು ಮುಚ್ಚುವ ನಿಲುವು ತಳೆದಿದೆ. ಇದರ ನೇರ ಪರಿಣಾಮ ಸಾರ್ವಜನಿಕರ ಮೇಲೆ ಆಗುತ್ತದೆ. ಆದ್ದರಿಂದ ಈ ಬಗ್ಗೆ ಬಂಕ್ ಮಾಲೀಕರು ಮತ್ತೊಮ್ಮೆ ಚಿಂತನೆ ನಡೆಸುವುದು ಒಳಿತು.
–ಸುದರ್ಶನ ಎಚ್. ಯಡಹಳ್ಳಿ, ಬೆನಕಟ್ಟಿ