‘ವೇಟೇಜ್’ ಎಂಬುದು ಆಡಂಬರದ ವಸ್ತುವಲ್ಲ. ಅದನ್ನು ಯಾರೂ ತೋರಿಸಿಕೊಳ್ಳಬೇಕಾಗಿಲ್ಲ. ನಿಸ್ವಾರ್ಥ ಮನೋಭಾವದಿಂದ ತನ್ನ ಕೆಲಸವನ್ನು ತಾನು ಮಾಡುತ್ತಾ ಹೋಗುವವನನ್ನು ಪ್ರತಿಷ್ಠೆ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಆದ್ದರಿಂದ, ನಮ್ಮ ಜನಪ್ರತಿನಿಧಿಗಳು ಕರ್ತವ್ಯ ನಿಷ್ಠರಾಗುವುದು ಅಪೇಕ್ಷಣೀಯವೇ ಹೊರತು, ‘ವೇಟೇಜ್’ನ ಬೆನ್ನು ಹತ್ತುವುದು ಖಂಡಿತಕ್ಕೂ ಅಲ್ಲ.