ಅರ್ಜಿದಾರರ ವಕೀಲ ಪ್ರಕಾಶ್ ಟಿ. ಹೆಬ್ಬಾರ್, ‘ಸರ್ಕಾರ ಭೂ ಕಂದಾಯ ಕಾಯ್ದೆಯ ಕಲಂ 97ರ ಪರಿಚ್ಛೇದ (4ಎ)ಕ್ಕೆ ಮೂರನೇ ಬಾರಿಗೆ ತಿದ್ದುಪಡಿ ತಂದಿದೆ. ತಿದ್ದುಪಡಿ ಅನುಸಾರ ಗೋಮಾಳ ಜಮೀನುಗಳನ್ನು ಬಗರ್ ಹುಕುಂ ಸಾಗುವಳಿದಾರರಿಗೆ ಹಸ್ತಾಂತರಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಖಾಸಗಿ ಭೂ ಮಾಲೀಕರಿಗೆ ಜಮೀನು ವರ್ಗಾವಣೆಯಾಗುವ ಸಾಧ್ಯತೆ ಇದೆ’ ಎಂದು ಆಕ್ಷೇಪಿಸಿದರು.