ಇಥಿಯೊಪಿಯಾ ಮೂಲದ ಈ ಧಾನ್ಯವು ಕಂದು ಮತ್ತು ಬಿಳಿ ಬಣ್ಣದಲ್ಲಿ ಇರಲಿದೆ. ಈ ಧಾನ್ಯವು ಬರ ನಿರೋಧಕ ಬೆಳೆಯಾಗಿದೆ. ಪ್ರತಿ ಎಕರೆಗೆ 200ರಿಂದ 250 ಕೆಜಿಗಳಷ್ಟು ಇಳುವರಿ ನೀಡಲಿದೆ. ಇದನ್ನು ಮುಂಗಾರು ಮತ್ತು ಹಿಂಗಾರು ಋತುಗಳಲ್ಲಿ ಬೆಳೆಯಬಹುದಾಗಿದೆ ಎಂದು ‘ಸಿಎಫ್ಟಿಆರ್ಐ’ ತಿಳಿಸಿದೆ.
ರಾಜ್ಯದ ಒಣ ಪ್ರದೇಶದಲ್ಲಿರುವ ಜಿಲ್ಲೆಗಳಲ್ಲಿ ಬೆಳೆಯಲೂ ಇದು ಸೂಕ್ತವಾಗಿದೆ. ರಾಜ್ಯದಲ್ಲಿ ಈ ಧಾನ್ಯದ ಉಪಯುಕ್ತತೆ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲು ‘ಸಿಎಫ್ಟಿಆರ್ಐ’ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ.