ಕೆ.ಆರ್.ಪೇಟೆ: ಹನಿ ನೀರಿಗೂ ಪರದಾಡುತ್ತಿರುವ ಇಂದಿನ ಸಂದರ್ಭ ದಲ್ಲಿ ಪಾಲಿಹೌಸ್ಗೆ ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಿಕೊಂಡು ವ್ಯವಸಾಯವನ್ನು ಲಾಭದಾಯಕ ವಾಗಿಸಿಕೊಂಡಿದ್ದಾರೆ ತಾಲ್ಲೂಕಿನ ಸಿಂಧಘಟ್ಟ ಹಾಗೂ ಬಿಲ್ಲರಾಮನ ಹಳ್ಳಿಯ ಇಬ್ಬರು ರೈತರು.ಪಾಲಿಹೌಸ್ನಲ್ಲಿ ತರಕಾರಿ, ಹೂವು, ಹಣ್ಣುಗಳನ್ನು ಬೆಳೆಯಲಾಗುತ್ತದೆ. ಜಿಲ್ಲೆಯ ಹಲವು ಕಡೆ ಇದನ್ನು ನಿರ್ಮಿಸಲಾಗಿದೆ. ಆದರೆ, ಇದಕ್ಕೆ ಮಳೆನೀರು ಸಂಗ್ರಹ ಪದ್ಧತಿಯನ್ನು ಅಳವಡಿಸಿಕೊಂಡವರು ವಿರಳ.