ವೆಂಕಟ್ರಾಮ್. ಎಲ್ ನಿರ್ಮಿಸಿರುವ ‘ಪೊರ್ಕಿ ಹುಚ್ಚ ವೆಂಕಟ್‘ ಚಿತ್ರ ಈ ವಾರ ತೆರೆಕಾಣುತ್ತಿದೆ.
ಹುಚ್ಚ ವೆಂಕಟ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಸತೀಶ್ ಬಾಬು ಸಂಗೀತ ನೀಡಿದ್ದಾರೆ. ಎಂ.ಆರ್. ಚೌಹಾಣ್ ಛಾಯಾಗ್ರಹಣ ಇದೆ. ವೆಂಕಟ್, ರಮೇಶ್ ಭಟ್, ಸೌಮ್ಯ, ರಚನ, ಗಣೇಶ್ರಾವ್ ನಟಿಸಿದ್ದಾರೆ.
***
ಸಿನಿ ಸಂಕ್ಷಿಪ್ತ
‘ಪರ್ಚಂಡಿ ಪ್ರಥಮ ಪ್ರತಿ ಸಿದ್ಧ
ಶಿವಾನಂದ ನಿರ್ಮಾಣದ ‘ಪರ್ಚಂಡಿ’ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದ್ದು ಮುಂದಿನ ತಿಂಗಳು ಚಿತ್ರ ತೆರೆಗೆ ಬರಲಿದೆ. ಜೂಮ್ ರವಿ ನಿರ್ದೇಶನ, ವಿನಯ್ ರಂಗಧೋಳ್ ಸಂಗೀತ, ರಾಜ್ ಕಡೂರ್ ಛಾಯಾಗ್ರಹಣ ಇದೆ. ಶೊಭರಾಜ್, ಮಹೇಶ್ದೇವು, ಕಲ್ಪನ, ಕುರಿಬಾಂಡ್ ರಂಗ, ಶಿವಾಜಿ, ವಾಸುದೇವ ಮೂರ್ತಿ, ನೇತ್ರ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
‘ಸಂಹಾರ’ಕ್ಕೆ ನಾಳೆ ಚಾಲನೆ
ಎ. ವೆಂಕಟೇಶ್, ಆರ್. ಸುಂದರ ಕಾಮರಾಜ್ ನಿರ್ಮಿಸುತ್ತಿರುವ, ಗುರು ದೇಶಪಾಂಡೆ ನಿರ್ದೇಶನದ ‘ಸಂಹಾರ’ ಚಿತ್ರದ ಚಿತ್ರೀಕರಣವು ಇದೇ 29ರಿಂದ ಆರಂಭವಾಗಲಿದೆ. ರವಿ ಬಸ್ರೂರ್ ಸಂಗೀತ, ಜಗದೀಶ್ ವಾಲಿ ಛಾಯಾಗ್ರಹ ಇದೆ. ಚಿರಂಜೀವಿ ಸರ್ಜಾ, ಹರಿಪ್ರಿಯಾ, ಕಾವ್ಯ ಶೆಟ್ಟಿ, ಚಿಕ್ಕಣ್ಣ, ಯತಿರಾಜ್, ಶ್ರೀನಿವಾಸಮೂರ್ತಿ, ಸಾಧುಕೋಕಿಲ ತಾರಾಗಣದಲ್ಲಿದ್ದಾರೆ.
ಮೇ ತಿಂಗಳಲ್ಲಿ ‘ಪಟಾಕಿ’ ತೆರೆಗೆ
ಗಣೇಶ್ ಅವರು ನಾಯಕನಾಗಿ ನಟಿಸಿರುವ, ಮಂಜುಸ್ವರಾಜ್ ನಿರ್ದೇಶನದ ‘ಪಟಾಕಿ’ ಚಿತ್ರದ ಎಲ್ಲಾ ಕಾರ್ಯಗಳು ಪೂರ್ಣವಾಗಿದ್ದು, ಮೇ ತಿಂಗಳಲ್ಲಿ ತೆರೆ ಕಾಣಲಿದೆ. ಗಣೇಶ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ಮೈಸೂರು ಮುಂತಾದ ಕಡೆ 62 ದಿನಗಳ ಚಿತ್ರೀಕರಣ ನಡೆದಿದೆ. ಈ ಚಿತ್ರದಲ್ಲಿ ಐದು ಹಾಡುಗಳಿವೆ. ಎಸ್.ವಿ. ಬಾಬು ನಿರ್ಮಾಪಕರು.
ರನ್ಯ, ಸಾಯಿಕುಮಾರ್, ಪ್ರಿಯಾಂಕ, ಆಶೀಶ್ ವಿದ್ಯಾರ್ಥಿ, ಸಾಧುಕೋಕಿಲ, ಸಂಪತ್ ಕುಮಾರ್ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ, ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣ, ವಿಶ್ವ ಸಂಕಲನ ಇದೆ.
ನಾಗೇಂದ್ರ ಅರಸ್ ಚಿತ್ರದಲ್ಲಿ ಜೆ.ಕೆ.
ನಾಗೇಂದ್ರ ಅರಸ್ ನಿರ್ದೇಶನದ ಹೊಸ ಚಿತ್ರದ ನಾಯಕನಾಗಿ ಜಯ್ ಕಾರ್ತಿಕ್ (ಜೆ.ಕೆ.) ಅಭಿನಯಿಸುತ್ತಿದ್ದಾರೆ. ಇನ್ನೂ ಶೀರ್ಷಿಕೆ ಇಡದ ಈ ಚಿತ್ರಕ್ಕೆ ಬ್ಯಾಂಕಾಕ್, ಪಟ್ಟಾಯದಲ್ಲಿ ಹತ್ತು ದಿನಗಳ ಚಿತ್ರೀಕರಣ ನಡೆದಿದೆ. ಜೆ.ಕೆ, ತಾಂಡವ್, ಜಹಂಗೀರ್, ಮನಿಷಾ ಈ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಮನಿಷಾ ಅವರೇ ನಿರ್ಮಾಪಕಿ ಕೂಡ.
ಯುಸಿನ್ ಡಿಸೋಜಾ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವಿ.ಮನೋಹರ್ ಹಾಗೂ ಮ್ಯಾಥ್ಯೂಸ್ ಮನು ಸಂಗೀತ, ನಾಗೇಂದ್ರ ಅರಸ್ ಸಂಕಲನ, ಕುಂಫು ಚಂದ್ರು ಸಾಹಸ, ಕಂಬಿರಾಜ್ ನೃತ್ಯ ಸಂಯೋಜನೆ ಇದೆ.