‘ಹುಲಿ ಮೃತದೇಹವನ್ನು ಹಗಲಿನಲ್ಲಿ ನೋಡಿದ ಸೋಮ ಮತ್ತು ಬೊಮ್ಮ, ರಾತ್ರಿ ವೇಳೆಗೆ ಬಂದು ಮುಖದ ಭಾಗವನ್ನು ಕತ್ತರಿಸಿ, ಅದರಿಂದ ಕೋರೆಹಲ್ಲುಗಳನ್ನು ಅಪಹರಿಸಿದ್ದರು. ನಂತರ, ಒಂದು ಕೋರೆಹಲ್ಲನ್ನು ತಿನ್ನಿಸ್ವಾಮಿಗೆ ₹ 3 ಸಾವಿರಕ್ಕೆ ಮಾರಾಟ ಮಾಡಿದ್ದರು. ಇವರಲ್ಲಿ ಸೋಮ ಹಾಗೂ ತಿನ್ನಿಸ್ವಾಮಿ ವಿರುದ್ಧ ಈಗಾಗಲೇ ಸತ್ತ ವನ್ಯಜೀವಿಗಳ ದೇಹದ ಭಾಗಗಳನ್ನು ಕತ್ತರಿಸಿ, ಮಾರಾಟ ಮಾಡಿದ ಪ್ರಕರಣಗಳು ದಾಖಲಾಗಿವೆ’ ಎಂದು ತನಿಖಾ ತಂಡದ ಮುಖ್ಯಸ್ಥ ಎಸಿಎಫ್ ಪೂವಯ್ಯ ತಿಳಿಸಿದರು.