‘ಪಾತಾಳಗಂಗೆಗೂ ಕನ್ನ’ ಸುದ್ದಿ ಓದಿ ಆಶ್ಚರ್ಯವಾಯಿತು. ‘ಭೂ ದಿನ’ ಆಚರಿಸಿದ್ದು ನೆನಪಿನಿಂದ ಮಾಸುವ ಮುನ್ನವೇ ಈ ರೀತಿಯ ವಿಚಾರಗಳು ಹೊರಬರುತ್ತಿರುವುದು ದುಃಖಕರ. ಜಗದ ಒಟ್ಟು ನೀರಿನ ಕೇವಲ ಮೂರು ಪ್ರತಿಶತ ಸಿಹಿನೀರಿನ ರೂಪದಲ್ಲಿ ಕೆರೆ, ನದಿ, ಹಳ್ಳ-ಕೊಳ್ಳ, ಬಾವಿಗಳಲ್ಲಿ ಇಲ್ಲವೆ ಧ್ರುವಪ್ರದೇಶಗಳಲ್ಲಿ ಮಂಜುಗಡ್ಡೆಯಾಗಿ ಅಥವಾ ಭೂಮಿಯ ಅಂತರಾಳದಲ್ಲಿ ಕಂಡುಬರುತ್ತದೆ.