ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 1ರಂದು ಬೆಳಿಗ್ಗೆ 5ಕ್ಕೆ ಮುರಗೋಡ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಚಿನ್ಮಯಾನುಗ್ರಹ ದೀಕ್ಷೆ ನೀಡಿ, ಕೊಟ್ಟೂರೇಶ್ವರ ದೇಶಿಕರೆಂದು ನಾಮಕರಣ ಮಾಡುವರು. ನಂತರ ಷಟಸ್ಥಲ ಬ್ರಹ್ಮೋಪದೇಶ ಕರುಣಿಸಿ ಅಭಿನವ ಕೊಟ್ಟೂರೇಶ್ವರ ಸ್ವಾಮೀಜಿ, ಗುರು ಕೊಟ್ಟೂರೇಶ್ವರ ಸ್ವಾಮೀಜಿ ಅಭಿದಾನ ನೀಡಲಿದ್ದಾರೆ. ಘೋಡಗೇರಿ ವಿರಕ್ತಮಠದ ಕಾಶೀನಾಥ ಸ್ವಾಮೀಜಿ ವೈದಿಕತ್ವ ಪಠಿಸುವರು. ರಾಮದುರ್ಗಾ ಶಾಂತವೀರ ಸ್ವಾಮೀಜಿ, ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ, ಅಮರಸಿದ್ದೇಶ್ವರ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಸಂಪದನ ಸ್ವಾಮೀಜಿ ಭಾಗವಹಿಸಲಿದ್ದಾರೆ.