ಇಂದು (ಏ.29) ಬೆಳಿಗ್ಗೆ 8 ಗಂಟೆಗೆ ಸಮ್ಮೇಳನದ ಮೆರವಣಿಗೆ ಪ್ರಾರಂಭ ವಾಗಲಿದೆ. ಐದು ವಿಶೇಷ ಬಂಡಿಗಳು ಮೆರವಣಿಗೆಯ ಆಕರ್ಷಣೆ ಹೆಚ್ಚಿಸಲಿವೆ. ಈ ಬಂಡಿಗಳಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಮಾಸ್ಕೇರಿ ಎಂ.ಕೆ. ನಾಯಕ ಹಾಗೂ ಅತಿಥಿಗಳು ಸಮ್ಮೇಳನ ನಡೆ ಯುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣಕ್ಕೆ ಬರುವರು. ಗ್ರಾಮೀಣ ಸೊಗಡಿನ ಡೊಳ್ಳು, ಹೆಜ್ಜೆ ಮಜಲು, ಕರಡಿ ಮಜಲು, ಪೂರ್ಣ ಕುಂಭ ಸ್ವಾಗತ ವಿಶೇಷ ಮೆರುಗನ್ನು ನೀಡಲಿದೆ.ಬೆಳಿಗ್ಗೆ 8 ಗಂಟೆಗೆ ತೇರಗಾಂವ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ ಲಕ್ಕನಗೌಡರ ರಾಷ್ಟ್ರ ಧ್ವಜಾರೋಹಣ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರ ವಿಂದ ಕರ್ಕಿಕೋಡಿ ನಾಡ ಧ್ವಜಾ ರೋಹಣ ನೆರವೇರಿಸುವರು.