ಈ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಎಂ.ಚಂದ್ರಶೇಖರ್, ‘ಮೃತ ಯುವಕ ಪಜೀರು ಗ್ರಾಮದ ವಾಸಿಯಾಗಿದ್ದು, ಕೆನರಾ ಸ್ಪ್ರಿಂಗ್ಸ್ ಎಂಬ ಸಂಸ್ಥೆಯ ಉದ್ಯೋಗಿ. ಕುಟುಂಬದೊಳಗಿನ ವೈಷಮ್ಯದ ಕಾರಣದಿಂದ ಈ ಕೊಲೆ ನಡೆದಿದೆ. ಕಾರ್ತಿಕ್ನ ತಂಗಿ ಕಾವ್ಯಶ್ರೀ, ಆಕೆಯ ಸಹೋದ್ಯೋಗಿ ಕುತ್ತಾರ್ನ ಸಂತೋಷ್ ನಗರದ ನಿವಾಸಿ ಗೌತಮ್ (25) ಮತ್ತು ಆತನ ತಮ್ಮ ಗೌರವ್ (19) ಎಂಬುವವರನ್ನು ಸಿಸಿಆರ್ಬಿ ಘಟಕದ ಎಸಿಪಿ ವೆಲೆಂಟೈನ್ ಡಿಸೋಜ ನೇತೃತ್ವದ ತನಿಖಾ ತಂಡ ತೊಕ್ಕೊಟ್ಟು ಬಳಿ ಬಂಧಿಸಿದೆ’ ಎಂದು ತಿಳಿಸಿದರು.