ಕುವೆಂಪುನಗರದ ಪಾಲಿಕೆ ಸದಸ್ಯ ವಿ.ವಿ. ಪ್ರತಿಭಾರಂಜನ್, ‘ಆರು ತಿಂಗಳ ಹಿಂದೆಯೇ ವಾರ್ಡ್ ಸಮಿತಿ ಸದಸ್ಯರ ಪಟ್ಟಿಯನ್ನು ಸಲ್ಲಿಸಿದ್ದೇನೆ. ನಾಗರಿಕ ಸಮಸ್ಯೆಗಳ ಕುರಿತು ಚರ್ಚಿಸಲು ಅದರ ಸದಸ್ಯರು ಪ್ರತಿ ತಿಂಗಳು ಸಭೆ ನಡೆಸುತ್ತಿದ್ದಾರೆ’ ಎಂದರು.
ಮತ್ತೀಕೆರೆ ವಾರ್ಡ್ನ ಸದಸ್ಯ ಎಂ.ಸಿ. ಜಯಪ್ರಕಾಶ್, ‘ವಾರ್ಡ್ನಲ್ಲಿ ಬದಲಾವಣೆ ತರುವ ಉದ್ದೇಶದಿಂದ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಕೆಲವರಹೆಸರುಗಳನ್ನು ಸೂಚಿಸಿವೆ. ಹಾಗಾಗಿ ಸಮಿತಿ ಸದಸ್ಯರ ಆಯ್ಕೆ ದೊಡ್ಡ ಕೆಲಸವಲ್ಲ’ ಎಂದರು.