ಮೈಸೂರು: ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವಗಳು ಸಾಮಾಜಿಕ ಬದುಕಿನ ಕಣ್ಣುಗಳು ಎಂದು ಶಾಸಕಿ ಎಂ.ಸಿ.ಮೋಹನಕುಮಾರಿ ಹೇಳಿದರು.
ಬಸವ ಜಯಂತಿ ಅಂಗವಾಗಿ ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಸಂಘಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟದ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಮಾತನಾಡಿದರು.
‘ಸ್ತ್ರೀಶಕ್ತಿಗೆ 12ನೇ ಶತಮಾನ ಕ್ರಾಂತಿಯೇ ಮೂಲ. ಮಹಿಳೆಯರಿಗೆ ಸಮಾನತೆ ಕಲ್ಪಿಸಲು ಬಸವಣ್ಣನವರು ಶ್ರಮಿಸಿದರು. ಇಷ್ಟಲಿಂಗ ಕಲ್ಪನೆಯನ್ನು ನೀಡಿದರು. ವೃತ್ತಿ ಮತ್ತು ಜಾತಿಯಲ್ಲಿನ ಮೇಲುಕೀಳುಗಳನ್ನು ಹೋಗಲಾಡಿಸಲು ಪ್ರಯತ್ನಿಸಿದರು’ ಎಂದರು.
ಬಸವಣ್ಣನವರು ಸಮಾಜ ಸುಧಾ ರಣೆಗೆ ಜೀವನವನ್ನೇ ಮುಡಿಪಾಗಿಟ್ಟ ಮಹಾಮಾನವತಾವಾದಿ. ಕಾಯಕ ಎಂದರೆ ದೇಹವನ್ನು ದಂಡಿಸಿ ಕೆಲಸ ಮಾಡುವುದು ಎಂಬುದನ್ನು ಸಾರಿದರು ಎಂದರು.
ಕುಲಪತಿ ಪ್ರೊ.ಸರ್ವಮಂಗಳಾ ಶಂಕರ್, ‘ವಚನ ಕೈಂಕರ್ಯವು ಸಂಗೀತ ಲೋಕವನ್ನು ಅದ್ಭುತವಾಗಿ ಬೆಳೆಸಿದೆ. ಶೈಕ್ಷಣಿಕ, ಸಾಂಸ್ಕೃತಿಕ ಲೋಕ ವನ್ನು ಶ್ರೀಮಂತಗೊಳಿಸಿದೆ’ ಎಂದರು.
‘ಸಾಂಸ್ಕೃತಿಕ, ಕಲಾ ಚಟುವಟಿಕೆ ಗಳಲ್ಲಿ ತೊಡಗಿಕೊಳ್ಳುವಂತೆ ಪೋಷಕರು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಕಲೆ ಅಭ್ಯಾಸವು ಏಕಾಗ್ರತೆಯನ್ನು ಮೈಗೂಡಿ ಸುತ್ತದೆ. ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಇದು ಸಹಕಾರಿ’ ಎಂದರು.
ಬಾಲನಟಿ ಸಿರಿ ವಾನಳ್ಳಿ ಮಾತನಾಡಿ, ‘ಸಿನಿಮಾ ಮೂಲಕ ಅಕ್ಷರಸ್ಥರಿಂದ ಅನಕ್ಷರಸ್ಥವರೆಗೆ ಎಲ್ಲರನ್ನೂ ತಲುಪಬಹು ದಾಗಿದೆ. ಸಿನಿಮಾದಲ್ಲಿ ಮನರಂಜನೆ ಜತೆಗೆ ಸಮಾಜದ ಒಳಿತು ಇರುತ್ತದೆ. ಜನತೆ ಸಿನಿಮಾದಲ್ಲಿನ ಒಳ್ಳೆಯ ಅಂಶಗಳನ್ನು ಗುರುತಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು’ ಎಂದರು.
ನಟ ಸುನೀಲ್ (ಡಾರ್ಲಿಂಗ್ ಕೃಷ್ಣ) ಮಾತನಾಡಿ, ಶಿಸ್ತು ಮತ್ತು ಪರಿಶ್ರಮ ಇದ್ದರೆ ಯಾವ ಸಾಧನೆಯೂ ಅಸಾಧ್ಯ ವಲ್ಲ ಎಂದರು. ಬಸವ ಬಳಗಗಳ ಮಹಿಳೆಯರು, ಮಕ್ಕಳಿಂದ ಕರಗ, ವೀರಗಾಸೆ, ನೃತ್ಯರೂಪಕ ಸಾಂಸ್ಕೃತಿಕ ಕಾರ್ಯ ಕ್ರಮಗಳು ಜರುಗಿದವು. ಬಸವಜ್ಞಾನ ಮಂದಿರದ ಮಾತೆ ಬಸ ವಾಂಜಲಿ, ನಟಿ ಐಶ್ವರ್ಯಾ ಪ್ರಸಾದ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಜಯಾಗೌಡ ಇದ್ದರು.