ಇದರಿಂದ ನೀರು ಬೇಗ ಹಿಂಗುವುದಿಲ್ಲ. ಜತೆಗೆ ಮಣ್ಣು ಸಡಿಲವಾಗುತ್ತದೆ. ಬಿತ್ತನೆ ಬೀಜ ಗಳನ್ನು ಬಿತ್ತುವ ಮೊದಲು 2 ವಾರಕ್ಕಿಂತ ಮುಂಚಿತವಾಗಿ ಗೊಬ್ಬರ ವನ್ನು ಭೂಮಿಗೆ ಹಾಕಬೇಕು. ಜತೆಗೆ ಬೀಜೋಪಚಾರ ಮಾಡಿ ಬಿತ್ತನೆ ನಡೆಸುವುದು ಸೂಕ್ತ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಕೆ. ರವೀಶ್ ಮಾತನಾಡಿ, ಕೃಷಿ ಇಲಾಖೆ ಯಿಂದ ಸಿಗುವ ಸವಲತ್ತುಗಳು ಹಾಗೂ ಮಾಹಿತಿಗಳು ರೈತರಿಗೆ ಸರಿಯಾದ ರೀತಿ ಯಲ್ಲಿ ಸಿಗುತ್ತಿಲ್ಲ. ಇಂತಹ ಕಾರ್ಯಕ್ರಮ ಗಳ ಮೂಲಕ ರೈತರಿಗೆ ಕೃಷಿ ಅಧಿಕಾರಿ ಗಳು ಅನುಕೂಲ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ರಾದ ಸುಧಾ, ಜಿ.ಸಿ. ಮಹದೇವಸ್ವಾಮಿ, ಬಾಗಳಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಪ್ರಭಾಮಣಿ, ಎಪಿಎಂಸಿ ಉಪಾಧ್ಯಕ್ಷ ಮಹದೇವಸ್ವಾಮಿ, ನಿರ್ದೇಶಕ ಶಂಕರ ಮೂರ್ತಿ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಪಿ.ತಮ್ಮಣ್ಣ, ಕೃಷಿನಿರ್ದೇಶಕಿ ಸುಂದ್ರಮ್ಮ, ಕೃಷಿ ಅಧಿಕಾರಿ ಲೀಲಾವತಿ, ಎಚ್.ಸಿ. ಮಹೇಶ್ಕುಮಾರ್, ಅಶೋಕ್ ಹಾಜರಿದ್ದರು.