ವ್ಯಂಗ್ಯಚಿತ್ರಕಾರರ ಸಂಖ್ಯೆ ಬಹಳ ಕಡಿಮೆ ಇದೆ. ಈ ಕಲೆಯನ್ನು ಹೆಚ್ಚು ಕಲಿಸಿಕೊಟ್ಟು ಜಾಗೃತಿ ಮೂಡಿಸುವ ಕೆಲಸಕ್ಕೆ ಹಿರಿಯ ವ್ಯಂಗ್ಯ ಚಿತ್ರಕಾರರು ಮುಂದಾಗಬೇಕು ಎಂದು ಅವರು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಕ್ಕೂರು ರಮೇಶ್, ವ್ಯಂಗ್ಯಚಿತ್ರ ನೋಡಲು ಮನರಂಜನೆ ನೀಡುವ ಕಲೆಯಾದರೂ ಅದರಲ್ಲಿ ಸಾಮಾಜಿಕ ವಿಡಂಬನೆ ಅಡಗಿರುತ್ತದೆ. ಅಂತಹ ಕಲೆಯನ್ನು ನಿರಂತರ ಪ್ರಯತ್ನ ಹಾಗೂ ಶ್ರದ್ಧೆಯಿಂದ ಮಾತ್ರ ಕಲಿಯಬೇಕು ಎಂದರು.
ಸಮಾಜ ಸೇವಕ ಅಕ್ರಂಖಾನ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಬಿ.ಟಿ.ನಾಗೇಶ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಆರ್.ಶಂಕರ್, ಎಲೇಕೇರಿ ಮಂಜುನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.