2017ರ ಸ್ವಚ್ಛ ಸರ್ವೇಕ್ಷಣಾ ವರದಿಯ ಪ್ರಕಾರ 100 ಸ್ವಚ್ಛ ನಗರಗಳ ಪಟ್ಟಿಯಲ್ಲಿ ವಾರಣಾಸಿ ಮಾತ್ರ ಸ್ಥಾನ ಪಡೆದಿತ್ತು. ಸ್ವಚ್ಛತೆ ಇಲ್ಲದ 15 ಜಿಲ್ಲೆ ಗಳ ಪೈಕಿ 9 ಜಿಲ್ಲೆಗಳು ಉತ್ತರಪ್ರದೇಶದ್ದಾಗಿತ್ತು. ರಾಜ್ಯದಲ್ಲಿ ಸ್ವಚ್ಛತೆಯ ಕೊರತೆ ಇರುವುದರ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಆದಿತ್ಯನಾಥ, ಡಿಸೆಂಬರ್ ತಿಂಗಳೊಳಗೆ ರಾಜ್ಯದ 30 ಜಿಲ್ಲೆಗಳನ್ನು ಬಯಲು ಶೌಚ ಮುಕ್ತವಾಗಿಸಲು ಕಾರ್ಯಾರಂಭ ಮಾಡಿದ್ದಾರೆ. ಮುಂದಿನ ವರ್ಷ ಅಕ್ಟೋಬರ್ ತಿಂಗಳೊಳಗೆ ಇಡೀ ರಾಜ್ಯವನ್ನು ಬಯಲ ಶೌಚ ಮುಕ್ತಗೊಳಿಸಲು ಉತ್ತರ ಪ್ರದೇಶ ಸರ್ಕಾರ ತೀರ್ಮಾನಿಸಿದೆ.