ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ ಶಿಕ್ಷಕರ ₹ 7.5 ಲೂಟಿ

Last Updated 9 ಮೇ 2017, 19:44 IST
ಅಕ್ಷರ ಗಾತ್ರ

ಬೆಂಗಳೂರು: ಕನಕಪುರ ರಸ್ತೆಯ ಪೂರ್ವ ಬೆಲ್ಮೆಂಟ್ ಅಪಾರ್ಟ್‌ಮೆಂಟ್ ಬಳಿ ದುಷ್ಕರ್ಮಿಗಳು ಯೋಗ ಶಿಕ್ಷಕ ಹಾಜೀಬೆನತ್ (51) ಎಂಬುವರ ಕಾರಿನಲ್ಲಿದ್ದ ₹ 7.5 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ.

ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಠಾಣೆಗೆ ದೂರು ಕೊಟ್ಟಿರುವ ಹಾಜೀಬೆನತ್, ‘ಬೆಳಿಗ್ಗೆ 10.30ರ ಸುಮಾರಿಗೆ ಸಾರಕ್ಕಿ ಸಿಗ್ನಲ್‌ನ ಐಸಿಐಸಿಐ ಬ್ಯಾಂಕ್ ಶಾಖೆಗೆ ಹೋಗಿ ₹ 7.5 ಲಕ್ಷ ಡ್ರಾ ಮಾಡಿದೆ. ಆ ಹಣವನ್ನು ಚೀಲದಲ್ಲಿ ಹಾಕಿ ಕಾರಿನ ಹಿಂಬದಿ ಸೀಟಿನಲ್ಲಿಟ್ಟಿದ್ದೆ. ಕನಕಪುರ ರಸ್ತೆ ಮಾರ್ಗವಾಗಿ ಮನೆಗೆ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು, ಹಿಂದಿನ ಚಕ್ರ ಪಂಕ್ಚರ್ ಆಗಿರುವುದಾಗಿ ಹೇಳಿದರು’ ಎಂದು ವಿವರಿಸಿದ್ದಾರೆ.

‘ಕಾರು ನಿಲ್ಲಿಸಿ ಟೈರ್ ಪರಿಶೀಲಿಸಿದಾಗ ಗಾಳಿ ಕಡಿಮೆ ಇತ್ತು. ಹೀಗಾಗಿ, ಸ್ಟೆಪ್ನಿ ಬದಲಿಸಲು ಮುಂದಾದೆ. ಈ ಹಂತದಲ್ಲಿ ಅವರು ಬ್ಯಾಗ್ ತೆಗೆದುಕೊಂಡು ಹೋಗಿದ್ದಾರೆ. ಸ್ಟೆಪ್ನಿ ಬದಲಿಸಿ ನೋಡಿದಾಗ ಕಾರಿನ ಬಾಗಿಲು ತೆಗೆದಿತ್ತು’ ಎಂದು ಅವರು ದೂರಿದ್ದಾರೆ.

ಸರ ಎಗರಿಸಿದರು: ಎಚ್‌ಎಸ್‌ಆರ್ ಲೇಔಟ್ 29ನೇ ಅಡ್ಡರಸ್ತೆಯಲ್ಲಿ ದುಷ್ಕರ್ಮಿಗಳು ಮಂಗಳವಾರ ಬೆಳಿಗ್ಗೆ ಸುಶೀಲಮ್ಮ ಎಂಬುವರ ಗಮನ ಬೇರೆಡೆ ಸೆಳೆದು ಚಿನ್ನದ ಸರ ಎಗರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT