ಬೆಂಗಳೂರು: ದುನಿಯಾ ವಿಜಯ್ ಅವರ ಕಥೆಗೆ ನಾಗಶೇಖರ್ ಆ್ಯಕ್ಷನ್–ಕಟ್ ಹೇಳಿರುವ ಚಿತ್ರ ‘ಮಾಸ್ತಿಗುಡಿ’ ಇದೇ ಶುಕ್ರವಾರ ತೆರೆಕಾಣಲಿದೆ.
ಯುಟ್ಯೂಬ್ನಲ್ಲಿ ಬಿಡುಗಡೆಯಾಗಿರುವ ಚಿತ್ರದ ಎರಡನೇ ಟ್ರೇಲರ್ ಟ್ರೆಂಡಿಂಗ್ನಲ್ಲಿ #2ರಲ್ಲಿದೆ. ಹುಲಿಗಳ ಸಂರಕ್ಷಣೆಯ ಕಥೆಯನ್ನು ಒಳಗೊಂಡ ಚಿತ್ರ ರಾಜ್ಯಾದ್ಯಂತ ಇದೇ ವಾರ(ಮೇ 12) ಬಿಡುಗಡೆಯಾಗಲಿದೆ.
ನಾಯಕ ವಿಜಯ್ ಸಿನಿಮಾದಲ್ಲಿ ಐದು ಗೆಟಪ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಮೂಲ್ಯ, ಕೃತಿ ಕರಬಂಧ, ರವಿಶಂಕರ್ ಗೌಡ ತಾರಾಗಣದಲ್ಲಿದ್ದಾರೆ. ಸಾಧುಕೋಕಿಲ ಸಂಗೀತ ಮತ್ತು ಕವಿರಾಜ್ ಗೀತರಚನೆ ಮಾಡಿದ್ದಾರೆ.
ಈ ಚಿತ್ರದ ಕ್ಲೈಮಾಕ್ಸ್ ದೃಶ್ಯಗಳ ಚಿತ್ರೀಕರಣದಲ್ಲಿ ನಟರಾದ ಅನಿಲ್ ಮತ್ತು ಉದಯ್ ತಿಪ್ಪಗೊಂಡನಹಳ್ಳಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದರು.