ಚಿನ್ನದ ಬಣ್ಣದ ಜರಿಯಂಚಿನ ಆಕಾಶ ನೀಲಿ ಸೀರೆಯಲ್ಲಿ ಅಮೂಲ್ಯ ಕಂಗೊಳಿಸುತ್ತಿದ್ದರು. ಸಂಜೆ ವಧುವಿಗೆ ಅರಿಸಿನ ಶಾಸ್ತ್ರ ಪೂರೈಸಲಾಯಿತು. ನಂತರ ಸಂಜೆ 7 ಗಂಟೆಗೆ ಆದಿಚುಂಚನಗಿರಿ ಮಠಕ್ಕೆ ತೆರಳಿ ಅಲ್ಲಿಯೇ ಗಂಡಿನ ಕಡೆಯವರನ್ನು ಬರಮಾಡಿಕೊಂಡರು. ನಂತರ ಒಕ್ಕಲಿಗ ಸಂಪ್ರದಾಯದ ಪ್ರಕಾರ ಲಗ್ನಪತ್ರಿಕೆ ಪೂಜಾ ಶಾಸ್ತ್ರ, ಹೆಣ್ಣಿಗೆ ಹೂ ಮುಡಿಸುವ ಶಾಸ್ತ್ರ, ವೀಳ್ಯದೆಲೆ ವಿನಿಮಯ ಶಾಸ್ತ್ರ, ಬಳೆ ಶಾಸ್ತ್ರ ನಡೆಯಿತು.
ಈ ಕಾರ್ಯಕ್ರಮಗಳಿಗೆ ಎರಡೂ ಕುಟುಂಬದ ಸಂಬಂಧಿಕರು ಮತ್ತು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು.
ಶುಕ್ರವಾರ ಬೆಳಿಗ್ಗೆ ಮೀಸಲು ನೀರು ತರುವ ಶಾಸ್ತ್ರದೊಂದಿಗೆ ಮದುವೆ ಕಾರ್ಯಕ್ರಮ ಆರಂಭವಾಗಲಿದೆ. ಹಾಗೆಯೇ ಭತ್ತ ಕುಟ್ಟುವ ಶಾಸ್ತ್ರವೂ ನಡೆಯಲಿದೆ. ನಂತರ ಕಂಕಣಧಾರಣೆ ಆಗಲಿದೆ.