ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನೊಬ್ಬನಿಂದ ಬ್ಯಾಂಕ್‌ ಅಧಿಕಾರಿಗೆ ಕಪಾಳ ಮೋಕ್ಷ

Last Updated 12 ಮೇ 2017, 13:29 IST
ಅಕ್ಷರ ಗಾತ್ರ
ADVERTISEMENT

ನವಲಗುಂದ: ಇಲ್ಲಿನ ವಿಜಯಾ ಬ್ಯಾಂಕಿನಲ್ಲಿ ತನ್ನ ಹೆಂಡತಿಯ ಖಾತೆಯಲ್ಲಿದ್ದ ಹಣ ಕೊಡುವಂತೆ ಕ್ಯಾತೆ ತೆಗೆದ ರೈತನೊಬ್ಬ ಬ್ಯಾಂಕ್‌ ಅಧಿಕಾರಿಗೆ ಕಪಾಳ ಮೋಕ್ಷ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೇ 10 ರಂದು ಶಂಕರ ಸಂಗಟಿ ಎಂಬ ರೈತ ಮಧ್ಯಾಹ್ನ 2.30 ರ ಸುಮಾರಿಗೆ ತನ್ನ ಹೆಂಡತಿಯ ಖಾತೆಯಲ್ಲಿದ್ದ ಹಣವನ್ನು ಕೊಡುವಂತೆ ಒತ್ತಾಯಿಸಿದ್ದಾನೆ.

ಹೆಂಡತಿಯನ್ನು ಕರೆದುಕೊಂಡು ಬಂದರೆ ಮಾತ್ರ ಹಣ ಕೊಡುವುದಾಗಿ ಬ್ಯಾಂಕ ಸಿಬ್ಬಂದಿ ತಿಳಿಸಿದ್ದಾರೆ. ಈ ವೇಳೆ  ರೊಚ್ಚಿಗೆದ್ದ ಶಂಕರ ಸಂಗಟಿ ಬ್ಯಾಂಕ್ ಸಿಬ್ಬಂದಿಯ ಕಪಾಳಕ್ಕೆ ಹೊಡೆದಿದ್ದಾನೆ.  ಅಲ್ಲದೆ ಬ್ಯಾಂಕ್‌ ವ್ಯವಸ್ಥಾಪಕ ಬಾಲಕೃಷ್ಣ  ಎಂಬುವರಿಗೂ ಹೊಡೆದಿದ್ದು ಆ ದೃಶ್ಯ  ಸಿ.ಸಿ.ಟಿ.ವಿ ಯಲ್ಲಿ ಸೆರೆಯಾಗಿದೆ.

ಈ ವಿಡಿಯೊ ವ್ಯಾಟ್ಸ್‌ಆ್ಯಪ್‌ಗಳಲ್ಲಿ ವೈರಲ್‌ ಆಗಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT