ಸವಣೂರ: ‘ಉತ್ತಮ ಆಡಳಿತಕ್ಕೆ ಅಂದಿನ ಸವಣೂರ ನವಾಬರ ಸಂಸ್ಥಾನ ಹೆಸರಾಗಿತ್ತು. ಆ ಖ್ಯಾತಿಗೆ ಚ್ಯುತಿ ಬಾರದಂತೆ ಇಲ್ಲಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಕಾರ್ಯ ನಿರ್ವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಸಲಹೆ ನೀಡಿದರು.
ಸ್ಥಳೀಯ ಶಿಗ್ಗಾವಿ ರಸ್ತೆಯ ಬಸವೇಶ್ವರ ನಗರದಲ್ಲಿ ನೂತನವಾಗಿ ನಿರ್ಮಿಸಿದ ಪುರಸಭೆ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.‘ಇಚ್ಛಾಶಕ್ತಿ ಮತ್ತು ಆತ್ಮಬಲ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ’ ಎಂದ ಅವರು, ‘ಸವಣೂರ ಏತ ನೀರಾವರಿ ಯೋಜನೆಯನ್ನು ಸರ್ಕಾರ ಪುನರ್ಪರಿಶೀಲಿಸಿ ಕಾಮಗಾರಿಯನ್ನು ಕೈಗೊಂಡಿದೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬಸವರಾಜ ಬೊಮ್ಮಾಯಿ, ‘ಹೊಸ ಕಟ್ಟಡ ಹೊಂದಿದ ಪುರಸಭೆಗೆ ಹೊಸ ಆಡಳಿತ ವ್ಯವಸ್ಥೆಯ ಅವಶ್ಯವಿದೆ. ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಡಳಿತ ಮಂಡಳಿ ಮುಂದುವರೆಯಬೇಕು’ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಪುರಸಭೆ ಅಧ್ಯಕ್ಷ ಖಲಂದರ ಅಕ್ಕೂರ, ಉಪಾಧ್ಯಕ್ಷೆ ರಾಜೇಶ್ವರಿ ಬುಶೆಟ್ಟಿ ಚೇರಮನ್ ಸಂಗಮೇಶ ಯರೇಶಿಮಿ, ಎಪಿಎಂಸಿ ಸದಸ್ಯ ಮಹೇಶ ಸಾಲಿಮಠ, ಸುಭಾಸ ಗಡೆಪ್ಪನವರ ಉಪಸ್ಥಿತರಿದ್ದರು.