ತಕ್ಷಣ ಕಾರಿನವನು, ‘ಸಾರ್ ನೀವು ಕನ್ನಡದವ್ರ, ಯಾವೂರು?’ ಎಂದ. ತಕ್ಷಣ ನಮ್ಮ ಮುಖವು ಕಮಲದಂತೆ ಅರಳಿ, ಪರಸ್ಪರ ಪರಿಚಯವಾಯಿತು. ಅವರು ದಾವಣಗೆರೆ, ಮಂಡ್ಯ ಎಂದೆಲ್ಲ ಹೇಳಿದರು. ಜಗಳದ ವಾತಾವರಣ ತಿಳಿಯಾಗಿ, ಜನರೆಲ್ಲ ನಮ್ಮನ್ನು ಆಶ್ಚರ್ಯದಿಂದ ನೋಡುತ್ತಿದ್ದರು.
ದೂರದ ನಾಡಲ್ಲಿ ಕನ್ನಡ ಭಾಷೆ ನಮ್ಮನ್ನೆಲ್ಲ ಬೆಸೆದಿತ್ತು. ಅದು ನಿಜಕ್ಕೂ ಮರೆಯಲಾಗದ ಜಗಳವಾಗಿತ್ತು. ಇಂದಿಗೂ ಒಮ್ಮೊಮ್ಮೆ ಬೇರೆ ರಾಜ್ಯಕ್ಕೆ ಹೋಗಿದ್ದಾಗ ಕನ್ನಡದವರು ಪರಸ್ಪರ ಕನ್ನಡದಲ್ಲಿ ಕಿತ್ತಾಡುವಾಗ ಈ ಘಟನೆ ನೆನಪಾಗುತ್ತದೆ.
-ಡಾ. ಸಂತೋಷ್ ಹೊಳಲ್ಕೆರೆ