ಶಿವಮೊಗ್ಗ: ಕಾಗೋಡು ತಿಮ್ಮಪ್ಪ ವಿಧಾನಸಭಾಧ್ಯಕ್ಷರಾಗಿದ್ದಾಗ ಹುಲಿಯಂತೆ ಇದ್ದರು. ಈಗ ‘ಕಾಗದದ ಹುಲಿ’ ಆಗಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.ನಗರದಲ್ಲಿ ಶನಿವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಅಧಿಕಾರ ಇಲ್ಲದಿದ್ದಾಗ ಕಾಗೋಡು ಸಾಕಷ್ಟು ಹೋರಾಟ ನಡೆಸಿದ್ದರು. ಶಾಸಕರಾದಾಗ ಜನಪರ ಕಾಳಜಿ ತೋರುತ್ತಿದ್ದರು. ವಿಧಾನಸಭಾಧ್ಯಕ್ಷರಾದಾಗಲೂ ವೀರಾವೇಶದ ಮಾತು ಆಡುತ್ತಿದ್ದರು. ಈಗ ನರಿಯಾಗಿಬಿಟ್ಟಿದ್ದಾರೆ ಎಂದು ಕುಟುಕಿದರು.
ಸಚಿವರಾಗಿ ಉತ್ತಮ ಕೆಲಸ ಮಾಡುವ ಬದಲು, ನಿತ್ಯವೂ ಅಧಿಕಾರಿಗಳ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಅಧಿಕಾರ ಚಲಾಯಿಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಲಿ ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಸ್ವಭಾವವಿದೆ. ದೇವೇಗೌಡರ ಜತೆ ಇದ್ದಾಗಿ ನಿಂದಲೂ ಅದೇ ಚಾಳಿ ಮುಂದು ವರಿದಿದೆ ಎಂದು ವ್ಯಂಗ್ಯವಾಡಿದರು.