ತುಮಕೂರು: ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿರುವ ‘ಹಜರತ್ ಅಲ್ಲಾ ಅಲ್ಲಾ ಸಾಯಿನ್ ಬಾಬಾ ದರ್ಗಾ’ ಉರುಸ್ ಮಂಗಳವಾರ ರಾತ್ರಿ ನಡೆಯಿತು.
ಉರುಸ್ ಪ್ರಯುಕ್ತ ದರ್ಗಾಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ದರ್ಗಾಕ್ಕೆ ನಗರದ ವಿವಿಧ ಭಾಗದ ಹಾಗೂ ಬೇರೆ ಜಿಲ್ಲೆಯ ಭಕ್ತರು ಬಂದು ಪ್ರಾರ್ಥಿಸಿದರು.
ವಿಶೇಷವಾಗಿ ಸಂಜೆ ಬೆಂಗಳೂರು, ಕೋಲಾರ, ಚಿಂತಾಮಣಿ, ಗುಬ್ಬಿ, ಅರಸೀಕೆರೆ, ಚಿಕ್ಕಮಗಳೂರು, ಕೆಸರಮಡವು ಭಕ್ತರು ಬಂದಿದ್ದರು ಎಂದು ದರ್ಗಾ ಮುಖ್ಯಸ್ಥರು ತಿಳಿಸಿದರು.
ರಾತ್ರಿ ದರ್ಗಾದಿಂದ ಹೊರಟ ಮೆರವಣಿಗೆಯು ನಗರದ ಪ್ರಮುಖ ರಸ್ತೆಯಲ್ಲಿ ಸಾಗಿತು. ಮೆರವಣಿಗೆಯಲ್ಲಿ ಭಕ್ತರು ಭಾಗವಹಿಸಿದ್ದರು.
ಅಹೋರಾತ್ರಿ ಕವ್ವಾಲಿ: ಪ್ರತಿ ವರ್ಷದಂತೆ ಈ ವರ್ಷವೂ ಅಹೋರಾತ್ರಿ ಕವ್ವಾಲಿ ಕಾರ್ಯಕ್ರಮ ನಡೆಯಿತು.
ಹೈದರಾಬಾದ್ನ ನವಾಜ್, ಸಬಿಹಾ, ತುಮಕೂರಿನ ಶಮ್ಷೇರ್ ಷಾ ಖಾದ್ರಿ ಅವರು ಕವ್ವಾಲಿ ಪ್ರಸ್ತುತಪಡಿಸಿದರು.