ಬೆಳಿಗ್ಗೆ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ ನಂತರ ಕುಂಭಕಳಸ ಸಕಲ ವಾದ್ಯ ವೈಭವಗಳೊಂದಿಗೆ ಪಲ್ಲಕ್ಕಿ ಉತ್ಸವ, ಮಧ್ಯಾಹ್ನ ಮಹಾಪ್ರಸಾದ, ಹಾಗೂ ಮಧ್ಯಾಹ್ನ ಧರ್ಮಸಭೆ ಜರುಗಿತು. ಧರ್ಮಸಭೆಯಲ್ಲಿ ಸಾನ್ನಿಧ್ಯವನ್ನು ಮಾಗಣಗೇರಿ ಶ್ರೀಗಳು, ಕಲಕೇರಿ ಶ್ರೀಗಳು, ನೇತೃತ್ವವನ್ನು ನಾವದಗಿ ಶ್ರೀಗಳು, ಅಧ್ಯಕ್ಷತೆಯನ್ನು ಚಳಕಾಪುರ ಹಾಗೂ ಆಳೂರ ಸಿದ್ಧಾರೂಢ ಮಠದ ಶ್ರೀಗಳು ವಹಿಸಿದ್ದರು.