ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ನಂಜಯ್ಯ, ‘ತಾಲ್ಲೂಕಿನಲ್ಲಿ 200 ಶಾಲೆಗಳು ದುರಸ್ತಿ ಆಗಬೇಕಿದ್ದು ₹ 14 ಕೋಟಿ ಹಣ ಅಗತ್ಯವಿದೆ. ಹಾಗಲವಾಡಿ, ಸಾತೇನಹಳ್ಳಿ, ಜೀಗನಹಳ್ಳಿ, ಹೊರಕೆರೆ ಶಾಲೆಗಳ ಕಟ್ಟಡಗಳು ಪೂರ್ಣ ಶಿಥಿಲವಾಗಿವೆ. ತಕ್ಷಣ ಈ ಕಟ್ಟಡಗಳ ದುರಸ್ತಿಗೆ ತಾಲ್ಲೂಕು ಪಂಚಾಯಿತಿ ಸದಸ್ಯರು ಅನುಮತಿ ನೀಡಬೇಕು’ ಎಂದು ಮನವಿ ಮಾಡಿದರು.