ಡಾ. ಶೇಖರ್ ಗೌಳೇರ್ ಮಾತನಾಡಿ, ಜೋಗ ಜಲಪಾತ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆ ಗಡಿಯ ಅತಿ ಸೂಕ್ಷ್ಮ ವನ್ಯಜೀವಿ ತಾಣ. ವಿಶ್ವ ಪರಂಪರೆಯ ತಾಣವೂ ಹೌದು. ಕಾನೂನಿನ ಪ್ರಕಾರ ಯಾವುದೇ ಬೃಹತ್ ಕಾಮಗಾರಿ ಇಲ್ಲಿ ಕೈಗೊಳ್ಳುವಂತಿಲ್ಲ ಎಂದರು. ಬಳಗದ ಮುಖಂಡರಾದ ಟಿ.ಎಂ. ಅಶೋಕ್ ಯಾದವ್, ಡಾ. ಪರಿಸರ ನಾಗರಾಜ್, ಎನ್.ಗೋಪಿನಾಥ್, ಅಜಯ್ ಶರ್ಮಾ ಉಪಸ್ಥಿತರಿದ್ದರು.