ತಾಲ್ಲೂಕಿನ ವಾಜರಹಳ್ಳಿ ಗ್ರಾಮದ ರಂಗನಾಥ್(34) ಎಂಬ ಯುವಕನ ಎರಡೂ ಮೂತ್ರಪಿಂಡ ವಿಫಲವಾಗಿದ್ದು, ದಾನಿಗಳ ನೆರವಿಗೆ ಅಂಗಲಾಚುತ್ತಿದ್ದಾರೆ.
ಬಡ ಕುಟುಂಬದ ರಂಗನಾಥ್ 9 ತಿಂಗಳ ಹಿಂದೆಯಷ್ಟೆ ವಿವಾಹವಾಗಿದ್ದು, ಈಗ ಈ ಸಮಸ್ಯೆ ಕಾಡುತ್ತಿರುವುದರಿಂದ ಪತ್ನಿ ಕೂಡ ಮನೆ ತೊರೆದು ಹೋಗಿದ್ದಾರೆ. ರಂಗನಾಥ್ ಸೋದರ ಕೂಡ ಅಂಗವಿಕಲನಾಗಿದ್ದು ತಂದೆ – ತಾಯಿ ವೃದ್ಧರು. ಅರ್ಧ ಎಕರೆ ಜಮೀನಿ ನಲ್ಲಿ ಕೃಷಿಯನ್ನೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಕುಟುಂಬಕ್ಕೆ ಆಧಾರ ವಾಗಿದ್ದ ಮಗನೇ ಈಗ ಅನಾರೋಗ್ಯಕ್ಕೆ ತುತ್ತಾಗಿರುವುದು ಬಡ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ.