'ದ ಹಿಂದು' ಪತ್ರಿಕೆ ವರದಿ ಪ್ರಕಾರ 2016ರಲ್ಲಿ ಬೇಸಿಗೆ ಕಾಲದಲ್ಲಿ ತಿವಾರಿ ಬೀದರ್ ಜಿಲ್ಲೆಗೆ ಬಂದಾಗ ಇಡೀ ಜಿಲ್ಲೆ ಬರದಿಂದ ಕಂಗಾಲಾಗಿತ್ತು. 130ಕ್ಕಿಂತಲೂ ಹೆಚ್ಚು ಕೆರೆ ಮತ್ತು 110 ತೆರೆದ ಬಾವಿಗಳನ್ನು ಶುಚಿಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದ ಇವರು ಕೆಲವೇ ತಿಂಗಳಲ್ಲಿ ಅದನ್ನು ಪೂರ್ಣಗೊಳಿಸಿದ್ದರು. ಆ ವರ್ಷ ಬೀದರ್ ನಲ್ಲಿ ವಾಡಿಕೆಗಿಂತ ಶೇ.40ರಷ್ಟು ಹೆಚ್ಚು ಮಳೆಯಾಗಿ, ಜಲಾಶಯಗಳು ತುಂಬಿದ್ದವು.