ಈ ಸಮಿತಿಯ ಅಧ್ಯಕ್ಷರಾಗಿರಲು ರಾಜ್ಯದ ಮಾಜಿ ರಾಜ್ಯಪಾಲ ಮತ್ತು ಭಾರತದ ಉಪರಾಷ್ಟ್ರಪತಿ ಶ್ರೀ ಗಿರಿ ಅವರೂ, ಉಪಾಧ್ಯಕ್ಷರಾಗಿರಲು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರೂ ಸಮ್ಮತಿಸಿರುವುದಾಗಿ ಅವರು ತಿಳಿಸಿದರು. ರಾಜ್ಯದ ಸಚಿವರು, ಕಲಾಭಿಮಾನಿಗಳು ಹಾಗೂ ಖ್ಯಾತ ಕಲಾವಿದರು ಸಮಿತಿ ಸದಸ್ಯರಾಗಿರುವುದಾಗಿ ಅವರು ಹೇಳಿದರು.