ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರದಲ್ಲಿ ಇಂತಹ ಯೋಜನೆಗಳ ಅಗತ್ಯವೇನು ಎಂಬುದು ಸ್ಪಷ್ಟವಾಗಿಲ್ಲ. 1998ರಲ್ಲಿ ಬಳ್ಳಾರಿ, ಹೊಸಪೇಟೆ ಪ್ರದೇಶದ ಗಣಿಗಳಿಂದ ಕಬ್ಬಿಣದ ಅದಿರನ್ನು ಕರಾವಳಿಯ ಬಂದರುಗಳಿಗೆ ಸಾಗಿಸಲು ಈ ಯೋಜನೆ ಅಗತ್ಯ ಎಂದು ಹೇಳಲಾಗಿತ್ತು. ಈಗ ಗಣಿಗಳು (‘ಎ’ ಕೆಟಗಿರಿ ಹೊರತುಪಡಿಸಿ) ಬಹುತೇಕ ಸ್ಥಗಿತಗೊಂಡಿವೆ. ಈ ವಿಷಯವನ್ನು ಗಮನಿಸದೆ ಇಪ್ಪತ್ತು ವರ್ಷದ ಹಿಂದೆ ರೂಪಿಸಿದ ಯೋಜನೆಯನ್ನು ಈಗ ಜಾರಿಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿರುವುದು ಹಾಸ್ಯಾಸ್ಪದ. ಕರ್ನಾಟಕವನ್ನು ಮರುಭೂಮಿಯಾಗಿಸುವಂತಹ ಇಂತಹ ಯೋಜನೆಗಳನ್ನು ಕೈಬಿಡುವುದು ಸೂಕ್ತ ಎನಿಸುತ್ತದೆ.