‘ಆರ್ಥಿಕವಾಗಿ ಹಿಂದುಳಿದ ನಾವು ಈ ಶಾಲೆಯಲ್ಲಿ ಒಂದನೇ ತರಗತಿಗೆ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿದ್ದೆವು. ಆರ್ಟಿಇ ಕೋಟಾದಡಿ ನಮಗೆ ಸೀಟು ಮಂಜೂರಾಗಿತ್ತು. ಆದರೆ, ಶಾಲಾ ಮುಖ್ಯಸ್ಥರು ನಮ್ಮನ್ನು ಶಾಲೆಯ ಆವರಣದೊಳಗೇ ಬಿಟ್ಟುಕೊಳ್ಳಲಿಲ್ಲ. ಗೇಟಿಗೆ ಬೀಗ ಹಾಕಿಸಿದ್ದರು. ಅರ್ಜಿ ಪರಿಶೀಲನೆ ನೆಪ ಹೇಳಿ ಸಾಗಹಾಕಿದ್ದರು’ ಎಂದು ರಿಟ್ ಅರ್ಜಿಯಲ್ಲಿ ವಿವರಿಸಿದ್ದಾರೆ.