‘ಮಲೆನಾಡಿನಿಂದ ಪವಿತ್ರ ಜಲ ತಂದು ಕೆರೆಗೆ ಚೆಲ್ಲಿದರೆ ಮಳೆ ಬಂದು ಕೆರೆ ತುಂಬುತ್ತದೆಯಂತೆ. ಈ ರೀತಿ ತಿಮ್ಮನಹಳ್ಳಿ ಜನ ಮಾಡಿದ್ದರಿಂದ ಅಲ್ಲಿ ಮಳೆ ಬಂತಂತೆ. ಊರಿಗೆ ಒಳ್ಳೆಯದಾಗಲಿ ಎಂದು ‘ಉಪ್ಪು ದಹನ’ಕ್ಕೆ ಮುಂದಾಗಿದ್ದೇವೆ. ಯುವಕರ 6 ತಂಡಗಳನ್ನು ರಚಿಸಿಕೊಂಡು ಅಹೋರಾತ್ರಿ ಬೆಂಕಿ ಆರದಂತೆ ನೋಡಿಕೊಳ್ಳುತ್ತಿದ್ದೇವೆ. ಇಂದು(ಶುಕ್ರವಾರ) ಬೆಳಿಗ್ಗೆ ಪವಿತ್ರ ಜಲ ತರಲು ಕಿಗ್ಗಾ ಗ್ರಾಮಕ್ಕೆ ಹೋಗುತ್ತಿದ್ದೇವೆ’ ಎಂದು ಕೆಲ ಯುವಕರು ‘ಪ್ರಜಾವಾಣಿ‘ಗೆ ತಿಳಿಸಿದರು.