ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಪರವಾಗಿ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸಲು ಕೇವಲ ಒಂದು ರೂಪಾಯಿ ಶುಲ್ಕ ಪಡೆಯುವ ಮೂಲಕ ವಕೀಲ ಹರೀಶ್ ಸಾಳ್ವೆ ದೇಶಪ್ರೇಮ ಮೆರೆದಿದ್ದಾರೆ.
ಜಾಧವ್ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ತರುವಲ್ಲಿ ಸಾಳ್ವೆ ಯಶಸ್ವಿಯಾಗಿದ್ದಲ್ಲದೆ, ತಮ್ಮ ವಾದದ ಮೂಲಕ ಪಾಕಿಸ್ತಾನದ ದ್ವಿಮುಖ ನೀತಿಯನ್ನು ವಿಶ್ವಕ್ಕೆ ಪರಿಚಯಿಸಿ ಜಾಗತಿಕ ಮಟ್ಟದಲ್ಲಿ ಆ ದೇಶ ತಲೆ ತಗ್ಗಿಸುವಂತೆ ಮಾಡಿದ್ದಾರೆ.
ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ರಾಜತಾಂತ್ರಿಕ ಗೆಲುವು ಎಂದರೆ ತಪ್ಪಾಗಲಾರದು. ಹರೀಶ್ ಸಾಳ್ವೆ ನಿಜವಾಗಿಯೂ ಅಭಿನಂದನಾರ್ಹರು.
-ವಿ.ಜಿ. ಇನಾಮದಾರ, ಸಾರವಾಡ