ಮೂಡುಬಿದಿರೆ: ‘ಆದಿಪುರಾಣ' ಮಹಾಕಾವ್ಯವನ್ನು ಬರೆದ ಪಂಪ ಮಹಾಕವಿಯು ಬಳಿಕ ಅರಿಕೇಸರಿಯ ವಿನಂತಿಯಂತೆ ಆತನ ಮಿತ್ರನಾಗಿ ಹಾಗೂ ಆಸ್ಥಾನ ಕವಿಯಾಗಿಯೂ ಸೇರಿ ಕೊಂಡನು. ಆದಿಪುರಾಣದಂತಹ ಇನ್ನೊಂದು ಕಾವ್ಯವನ್ನು ಬರೆಯುವಂತೆ ಯೂ ಮತ್ತು ಅದು ತನ್ನನ್ನು ಹೊಗಳಿ ಬರೆಯುವಂತಹ ಕಾವ್ಯವಾಗವಾಗ ಬಾರದೆಂಬ ಅರಿಕೇಸರಿಯ ಕೇಳಿಕೆ ಯಂತೆ ಪಂಪನು ಕರ್ಣನನ್ನೇ ಕೇಂದ್ರವಾ ಗಿಟ್ಟುಕೊಂಡು 'ವಿಕ್ರಮಾರ್ಜುನ ವಿಜಯ' ಎಂಬ ವಿಶ್ವಮಾನ್ಯ ಕಾವ್ಯವನ್ನು ಸೃಷ್ಟಿಸಿದನು ಎಂದು ಸಾಹಿತಿ, ಶಿಕ್ಷಣತಜ್ಞ, ಡಾ. ವಿಶ್ವನಾಥ ಕಾರ್ನಾಡ್ ಮುಂಬೈ ಹೇಳಿದರು.