ಭಾಷಣ ಮುಗಿಸುವ ಮುನ್ನ ಸಿದ್ದರಾಮಯ್ಯ, ‘ವರ್ತೂರು ಪ್ರಕಾಶನ ಒತ್ತಡಕ್ಕೆ ಮಣಿದು ಇಲ್ಲಿಗೆ ಬಂದೆ. ಅವ ನಮ್ದೇ ಗಿರಾಕಿ. ನಮ್ಮ ಜತೆ ಇರ್ತಾನೆ. ಆಗಾಗ್ಗೆ ದೂರ ಆಗ್ತಾನೆ, ಮತ್ತೆ ಬರ್ತಾನೆ. ಆದ್ರೇ ಸಮಾಜ ಸಂಘಟಿಸೋದ್ರಲ್ಲಿ ಸದಾ ಮುಂದಿರ್ತಾನೆ’ ಎನ್ನುವ ಮಾತುಗಳನ್ನು ಹೇಳುತ್ತಿದ್ದಂತೆ ಆವಕ್ಕಾಗುವ ಸರದಿ ನೆರೆದಿದ್ದ ಜನಸ್ತೋಮದ್ದಾಗಿತ್ತು.