ಕುಡಿಯುವ ನೀರಿನ ಯೋಜನೆ ಅನು ಮೋದನೆಗೆ ಸಂಬಂಧಿಸಿದಂತೆ ನಡೆದ ಸಭೆ ಪೂರ್ಣಗೊಂಡ ನಂತರ ರಾಮ ಚಂದ್ರ ಊಟ ಮಾಡುತ್ತಿದ್ದರು. ಈ ವೇಳೆ ಅವರತ್ತ ತೆರಳಿದ ಕುನ್ನಿಬಾವಿ, ದೇವರ ಗುಡಿಹಾಳ ಮತ್ತು ಶೆರೆವಾಡ ಗ್ರಾಮ ಪಂಚಾಯಿತಿ ಸಿಬ್ಬಂದಿ ನೇಮಕಾತಿ ಕುರಿತ ಕಡತದ ಬಗ್ಗೆ ವಿಚಾರಿಸಿದರು. ಈ ಹಂತ ದಲ್ಲಿ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕುನ್ನಿಬಾವಿ ಅವರು ರಾಮಚಂದ್ರ ಅವರನ್ನು ಅವಾಚ್ಯವಾಗಿ ನಿಂದಿಸಿದರು. ಆಗ ರಾಮಚಂದ್ರ ಅವರು ಜಿಲ್ಲಾ ಪಂಚಾಯ್ತಿ ಸಿಇಒ ಸ್ನೇಹಲ್ ಆರ್. ಅವರತ್ತ ತೆರಳಿ ಘಟನೆ ವಿವರಿಸಲು ಮುಂದಾದಾಗ, ಅವರ ಭುಜಕ್ಕೆ ಕುನ್ನಿಬಾವಿ ತಿವಿದರು.