ಸವದತ್ತಿ : ಇಲ್ಲಿನ ಹೆಸ್ಕಾಂನ ಸಹಾಯಕ ಎಂಜನಿಯರ ದೇವರಾಜ ಹೆಗಡೆ ಗುತ್ತಿಗೆದಾರರಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹೆಸ್ಕಾಂ ಸಹಾಯಕ ಎಂಜನಿಯರ್ ಹೆಗಡೆ ಅವರು, ಶಿರಸಂಗಿಯ ನಿರಂತರ ಜ್ಯೋತಿ ಕಾಮಗಾರಿ ಮಾಡಿದ ಗುತ್ತಿಗೆದಾರ ರವಿಕುಮಾರ ಬಸಪ್ಪ ಕುಂಬಾರ ಎಂಬವರು 2016 ರಲ್ಲಿ ನಡೆದ ಕೆಲಸದ ₹ 5 ಲಕ್ಷ ಬಿಲ್ಲು ತಗೆದುಕೊಡಲು ₹ 10 ಸಾವಿರ ಕೇಳಿದ್ದರು. ಲಂಚ ಕೊಡದೇ ಬಿಲ್ಲು ಮಂಜೂರು ಮಾಡುವುದಿಲ್ಲಾ ಎಂದು ಹಠಕ್ಕೆ ಬಿದ್ದಿದ್ದರು.