ಪಂಪ್ಸೆಟ್ಗಳಿಗೆ ಹಾನಿಯಾಗಿ ಸಾಕಷ್ಟು ನಷ್ಟು ಅನುಭವಿಸಿದ್ದೇವೆ. ಆದರೆ, ಅಧಿಕಾರಿಗಳು ಪರಿಹಾರ ಕೊಟ್ಟಿಲ್ಲ. ಮತ್ತೊಂದೆಡೆ ಲಾರಿ ಮಾಲೀಕರು ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಧರಣಿನಿರತರು ಕೊಳವೆ ಬಾವಿ ಕೊರೆಯುವ ಲಾರಿಯನ್ನು ಅಡ್ಡಗಟ್ಟಿದರು. ಈ ವೇಳೆ ಲಾರಿ ಚಾಲಕ ಮತ್ತು ಧರಣಿನಿರತರ ನಡುವೆ ವಾಗ್ವಾದ ನಡೆಯಿತು. ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಧರಣಿನಿರತರು ಲಾರಿ ಮೇಲೆ ಕಲ್ಲು ತೂರಿ ವಾಹನದ ಗಾಜನ್ನು ಪುಡಿ ಪುಡಿ ಮಾಡಿದರು.