ಕಾನೂನನ್ನು ಕೈಗೆ ತೆಗೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಈ ರೀತಿ ಹಿಂಸಾಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಗೋರಕ್ಷಣೆ ಹೆಸರಲ್ಲಿ ಹಿಂಸಾಚಾರ ಮಾಡಿದ ಕೆಲವರು ತಾವು ಬಿಜೆಪಿಯವರು ಎಂದು ಹೇಳಿಕೊಳ್ಳುತ್ತಿರುವುದನ್ನು ನಾನು ಟೀವಿಯಲ್ಲಿ ನೋಡಿದ್ದೇನೆ. ಆದರೆ ಆ ವ್ಯಕ್ತಿಗೆ ಬಿಜೆಪಿಯೊಂದಿಗೆ ಸಂಬಂಧವಿರುವುದಿಲ್ಲ, ನಮಗೂ ಆತನೊಂದಿಗೆ ಸಂಬಂಧವಿರಲ್ಲ. ಆದರೂ ಎಲ್ಲ ತಪ್ಪುಗಳನ್ನು ನಮ್ಮ ಮೇಲೆಯೇ ಹೊರಿಸಲಾಗುತ್ತದೆ.